
2nd June 2025
೩೩೦ ನೇ ಕವಿಗೋಷ್ಠಿ
ಮನೆಮನೆ ಕವಿಗೋಷ್ಠಿಯು ಕನ್ನಡ ಸಾಹಿತಿಗಳು ಉದ್ಯೋನ್ಮುಖ ಕವಿಗಳಿಗೆ ಸೃಜನಾತ್ಮಕ ಸಾಹಿತ್ಯ ರಚಿಸುವ ನಿಟ್ಟಿನಲ್ಲಿ ಒಂದು ಉತ್ತಮ ವೇದಿಕೆಯಾಗಿದೆ ಎಂದು ಮನೆಮನೆ ಕವಿಗೋಷ್ಠಿಯ ಸಂಚಾಲಕಿ ಲೇಖಕಿ ಸುಕನ್ಯಾ ಮುಕುಂದ ರವರು ತಿಳಿಸಿದರು. ಅವರು ಕಳೆದ ಭಾನುವಾರ ೩೩೦ ನೇ ಮನೆಮನೆ ಕವಿಗೋಷ್ಠಿ ಕರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನು ಹಾಡುತ್ತಾ ಹೇಳಿದರು. ಕುಮಾರಿ ಶ್ರೀಲಕ್ಷ್ಮಿಯವರ ಪ್ರರ್ಥನೆಯೊಂದಿಗೆ ಪ್ರಾರಂಭವಾದ ಕರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನೆರವೇರಿಸಲಾಯಿತು. ಕನ್ನಡ ಸಾರಸ್ಯತ ಲೋಕದ ದಿಗ್ಗಜರಾದ ಎಚ್ಎಸ್ ವೆಂಕಟೇಶಮರ್ತಿಯವರ ನಿಧನಕ್ಕೆ ಮೌನಚರಣೆಯನ್ನು ಆಚರಿಸಲಾಯಿತು. ನಂತರ ಡಾಕ್ಟರ್ ಶಾಂತ ಅತ್ನಿಯವರ ಕಷ್ಟಗಳಿಗೂ ಸಾವಿದೆ ಕಥಾ ಸಂಕಲನವನ್ನು ಲೇಖಕಿ ವಾಣಿ ಮಹೇಶ್ ರವರು ಒಂದು ಕಥೆಯನ್ನು ಬರೆಯಬೇಕಾದಾಗ ವಾಸ್ತವ ಸಂಗತಿ ೭೦ ಭಾಗ ಹಾಗೂ ಕವಿಕಲ್ಪನೆ ೩೦ ಭಾಗ ಸೇರಿದಾಗ ಮಾತ್ರ ಒಂದು ಸುಂದರ ಕಥೆಯು ಸಾಕಾರವಾಗುತ್ತದೆ ಎಂದು ಕೃತಿಯನ್ನು ವಿಶ್ಲೇಷಣೆ ಮಾಡಿದರು ತಮ್ಮ ಕೃತಿಯ ಕಥೆಗಳು ತಮ್ಮ ಊರಿನ ಮತ್ತು ವೃತ್ತಿಯ ಅನುಭವದ ಮೂಸೆಯಲ್ಲಿ ಮೂಡಿಬಂದ ಕಥೆಗಳಾಗಿವೆ ಎಂದು ಡಾಕ್ಟರ್ ಶಾಂತ ಅತ್ನಿ ಮಾತನಾಡಿದರು ಲೇಖಕಿ ಶ್ರೀಮತಿ ಎಂ. ಕುಸುಮರವರು ತಮ್ಮ ಸಂವಾದಿ ಕವನ ಸಂಕಲನವನ್ನು ಮನೆಮನೆ ಕವಿಗೋಷ್ಠಿ, ಕರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದು ತೃಪ್ತಿ ತಂದಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗಳಿಸಿದ ಹಾಸನ ಜಿಲ್ಲೆಯ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಭಿನಂದಿಸಲಾಯಿತು. ಕುಮಾರವ್ಯಾಸ ಪ್ರಶಸ್ತಿಗೆ ಶ್ರೀಯುತ ಚೆನ್ನೇಗೌಡರು ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಉದಯ ವರದಿ ಪತ್ರಿಕೆ ಸಂಪಾದಕರಾದ ಶ್ರೀಯುತ ವೆಂಕಟೇಶ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ನಡೆದ ಕವಿಗೋಷ್ಠಿಯಲ್ಲಿ ಆಗಮಿಸಿದ ಕವಿಗಳಿಂದ ಕವನ ವಾಚನ ನಡೆಯಿತು ಪ್ರಕೃತಿ, ಪ್ರೇಮ ,ದೇಶಭಕ್ತಿ ,ಅಪ್ಪ ಮುಂತಾದ ವಸ್ತು ವಿಷಯಗಳಲ್ಲಿ ಇರುವ ಕವನಗಳಿಗೆ ಗೋಷ್ಠಿಯಲ್ಲಿನ ಹಿರಿಯ ಕವಿಗಳು ವಿರ್ಶೆ ಮಾಡಿದರು. ಕವಿಗೋಷ್ಠಿಯಲ್ಲಿ ನೀಲಾವತಿ ಸಿ.ಎನ್, ಸುಧೀರ್ ಹೆಜ್ಮಾಡಿ, ಹೆಚ್.ಎನ್ ಭಾರತಿ, ಸುಂದರೇಶ ಡಿ ಉಡುವಾರೆ, ಎನ್.ಎಲ್ ಚನ್ನೇಗೌಡ, ಚಿದಾನಂದ. ಕೆ.ಎನ್, ತಬಸುಮ್ ಬಾನು, ಕಮಲಮ್ಮ, ಜಯರಮೇಶ, ಗಿರಿಜಾ ನರ್ವಾಣಿ, ಶಾಂತ ಅತ್ನಿ, ಎಂ.ಕುಸುಮ, ಪದ್ಮಾವತಿ ವೆಂಕಟೇಶ್, ಮಲ್ಲೇಶ್ ಜಿ, ಗೊರೂರು ಅನಂತರಾಜು, ಪರಮೇಶ ಮಡಬಲು ಕವನ ವಾಚಿಸಿದರು. ಹೊಸ ಕವಿಗಳ ಆಗಮನ ಮತ್ತು ಕವನ ವಾಚನ ಗಮನರ್ಹವಾಗಿತ್ತು. ಲೇಖಕಿ ಶ್ರೀಮತಿ ರೇಖಾ ಪ್ರಕಾಶ್ ರವರ ಪ್ರಾಯೋಜಕತ್ವದಲ್ಲಿ ವಿಜಯನಗರದ ಅವರ ನಿವಾಸದಲ್ಲಿ ಕರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು ಆಗಮಿಸಿದ ಎಲ್ಲಾ ಕವಿಗಳಿಗೂ ತಮ್ಮ ಕೃತಿಯನ್ನು ನೀಡಿದರು. ಕರ್ಯಕ್ರಮದಲ್ಲಿ, ರಾಜೇಶ್ವರಿ ವಿಶ್ವನಾಥ, ಗಾಯತ್ರಿ, ಮಹೇಶ್ ಹೆಚ್.ಆರ್, ಮುಕುಂದ ಎಂ, ಮಧುಸೂದನ್, ಜೆ.ಆರ್ ರವಿಕುಮಾರ್,ಮಲ್ಲಿಗಮ್ಮ ಸಿ.ಆರ್, ಸುನೀತ, ಶೃತಿ, ಮಂಜುಳ ಕುಮಾರಸ್ವಾಮಿ, ಲೋಕಪಾಲ, ಯಾಕೂಬ್ ಗೊರೂರು ಮತ್ತಿತರರು ಭಾಗವಹಿಸಿದ್ದರು. ಕರ್ಯಕ್ರಮದ ನಿರೂಪಣೆಯನ್ನು ಸಾಹಿತಿ ಸಮುದ್ರವಳ್ಳಿ ವಾಸು ಹಾಗೂ ಲೇಖಕಿ ಗಿರಿಜಾ ನರ್ವಾಣಿ ನರ್ವಹಿಸಿದ್ದು ರೇಖಾ ಪ್ರಕಾಶ್ ಸ್ವಾಗತಿಸಿ ,ಸುಧೀರ್ ಹೆಜ್ಮಾಡಿ ವಂದನರ್ಪಣೆ ಸಲ್ಲಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.